ನಮ್ಮ ದೇವರುಗಳು ಮತ್ತು ನಮ್ಮ ಆಚರಣೆಗಳ ಒಳಅರ್ಥ

- ವಾಸುದೇವ ಕೆ 

ಹಿಂದೂ ಎನ್ನುವುದು ಕೇವಲ ಧರ್ಮವಲ್ಲ  ಆದರೆ ನಮ್ಮ ಬದುಕಿನ ಆಚರಣೆ (way of life). ಅದಕ್ಕೆ ಪೂರಕವಾಗಿ ಈ ಲೇಖನವನ್ನು ಬರೆದಿದ್ದೇನೆ.


ಹಿಂದೂ ದೇವರುಗಳು ಮತ್ತು ನಮ್ಮ ಪುರಾಣದ ಕಥೆಗಳು ಪ್ರಮುಖವಾಗಿಪ್ರಕೃತಿಯೊಳಗೆ ನಾವುಗಳು ಹೇಗೆ ಒಂದಾಗಬೇಕು ಮತ್ತು ಪ್ರಕೃತಿಯನ್ನು ಉಳಿಸುವುದು ಹಾಗು ಪ್ರಕೃತಿ ಆಧಾರನೆಯೇ ಮಾನವ  ಜನ್ಮದ ಮುಖ್ಯ ಉದ್ದೇಶ ಎಂದು ತಿಳಿಸುತ್ತವೆ.

ಗಿಡಮರಪ್ರಾಣಿಪಕ್ಷಿ ಮತ್ತು ಪ್ರಕೃತಿ ಮಾತೆಯ ಪ್ರತಿಯೊಂದು ಪದಾರ್ಥವು ನಮ್ಮ ದೇವಾರಾಧನೆಯಪ್ರಮುಖ ಅಂಗಗಳಾಗಿವೆ. ಅದಕ್ಕೆ ಹೇಳುವುದು, ಹಿಂದೂ ಎನ್ನುವುದು ಧರ್ಮ ಮಾತ್ರವಲ್ಲ, ಅದು ಒಂದು ಪಾರಂಪರಿಕವಾಗಿ ಬಂದ ಬದುಕಿನ ಆಚರಣೆ ಎಂದು.

ತುಳಸಿಗಿಡ ನಮ್ಮ ಮನೆಯಂಗಳದ ಪ್ರಮುಖ ಜಾಗವನ್ನು ಅಲಂಕರಿಸುತ್ತೆ ಮತ್ತು ನಾವುಗಳು ಪ್ರತಿದಿನ  ಗಿಡವನ್ನು ಪೂಜಿಸುತ್ತೇವೆ. ಅದರ ಔಷಧೀಯ ಗುಣಗಳು ಎಲ್ಲರಿಗೂ ಗೊತ್ತಿರುವ ವಿಷಯವೇ.

ಬಹಳ ಹಬ್ಬಗಳಿಗೆ ಮಾವಿನ ಸೊಪ್ಪು ಬೇಕೇಬೇಕು ಮನೆಯ ಮುಖ್ಯದ್ವಾರದ ತೋರಣಕ್ಕೆ, ದೇವರಮನೆಗೆ, ಮಂಟಪಕ್ಕೆ ಬೇಕೇಬೇಕು ಬಾಳೆದಿಂಡಿನ ಅಲಂಕಾರಕನಿಷ್ಠ  ಹಣ್ಣುಗಳ ನೈವೇದ್ಯ   ಅತೀ ಅವಶ್ಯಕ.

 ಪದ್ಧತಿ ಪ್ರತಿ ಗಿಡ ಮತ್ತು ಮರ ಬೆಳೆಯುವ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ನಮ್ಮ  ಪೂರ್ವಜರು ಆಲೋಚಿಸಿಯಾವ ಹಬ್ಬಕ್ಕೆ ಯಾವ ಗಿಡ ಮರದ ಅವಶ್ಯಕತೆ ಇರಬೇಕೆಂದು ತೀರ್ಮಾನಿಸಿರಬೇಕು. ಎಂತಹ ದೂರಾಲೋಚನೆ? ಪ್ರತಿ ಗಿಡ-ಮರದ ಉಳಿವಿಗೆ ತೆಗೆದುಕೊಂಡ ನಿಲುವಿರಬೇಕು.

ಪ್ರತಿ ಹಿಂದೂ ಹಬ್ಬಕ್ಕೆ ಒಂದು ಗಿಡ ಅಥವಾ ಮರದ ಅವಶ್ಯಕತೆ ಇದ್ದೆ ಇರುತ್ತೆ  ಪದಾರ್ಥ  ಹಬ್ಬದ ತಿಂಗಳಿನಲ್ಲಿ ಪ್ರಕೃತಿಯಲ್ಲಿ ಸಿಕ್ಕೇ ಸಿಗುತ್ತದೆ ಮತ್ತು  ಪದಾರ್ಥ ಮನುಷ್ಯನಿಗೆ ಆರೋಗ್ಯದ   ದೃಷ್ಟಿಯಿಂದ  ಋತುವಿನಲ್ಲಿ ಅತಿಅವಶ್ಯಕವಾಗಿರುತ್ತದೆ.

ಪ್ರಮುಖ ಹಬ್ಬಗಳಲ್ಲಿ ಕೆಲವು ಬೇಕೇಬೇಕಾದ ಪದಾರ್ಥ ಮತ್ತು ತಿಂಡಿಗಳು :

  • ಯುಗಾದಿಯ ಬೇವು-ಬೆಲ್ಲ ಮತ್ತು ಒಬ್ಬಟ್ಟು ;
  • ಸಂಕ್ರಾಂತಿಯ ಎಳ್ಳು-ಬೆಲ್ಲ, ಕಬ್ಬು, ಗೆಣಸು, ಅವರೆಕಾಯಿ, ಕಡ್ಲೇಕಾಯಿ ಮತ್ತು ಪೊಂಗಲ್ ;
  • ಶಿವರಾತ್ರಿಯ ಉಪವಾಸಕ್ಕೆ ಅನುಗುಣವಾದ ಫಲಹಾರಗಳು ;
  • ರಾಮನವಮಿಯ ಪಾನಕ ಮತ್ತು ಹೆಸರುಬೇಳೆ ;  
  • ಗೌರಿ - ಗಣೇಶ ಹಬ್ಬದ ಹೋಳಿಗೆ ಮತ್ತು ಕಡುಬು ;
  • ಕೃಷ್ಣ ಜನ್ಮಾಷ್ಟಮಿಯ ಬಗೆಬಗೆಯ ತಿಂಡಿಗಳು ;
  • ದಸರಾ ಹಬ್ಬದ ಪ್ರತಿದಿನದ ವಿಶೇಷ ತಿಂಡಿಗಳು ;
  • ದೀಪಾವಳಿಯ ಕಜ್ಜಾಯ.
ಮೊದಲು ಎಲ್ಲರೂ ಸೇರಿ ಒಟ್ಟು ಕುಟುಂಬಗಳಿದ್ದ ಮನೆಗಳಲ್ಲಿ ಇಂತಹ ತಿಂಡಿಗಳನ್ನು ಹಬ್ಬದ ದಿನ ಮಾತ್ರ ತಯಾರಿಸುತ್ತಿದ್ದರುಆದರೆ ಈಗಿನ ಬಿಟ್ಟು ಕುಟುಂಬಗಳಿರುವ (nuclear familyಹಾಗು  ಸಮಯದ ಅಭಾವದ ಕಾರಣದಿಂದ ಹೊಸ ಹೋಟೆಲ್ಗಳು, ಅಂಗಡಿಗಳು ಹುಟ್ಟಿಕೊಂಡಿವೆ  ತಿಂಡಿಗಳನ್ನು ಹಬ್ಬ ಇರಲಿ ಅಥವಾ  ಇಲ್ಲದಿರಲಿ ನಮಗೆ ಬೇಕಾದಾಗ ಆಸೆಯಾದ ತಿಂಡಿ ತಿನ್ನಿಸೋಕೆ. ಸುಮಾರು ೨೫ ವರುಷಗಳ ಹಿಂದೆ ಒಬ್ಬಟ್ಟು / ಹೋಳಿಗೆ ತಿನ್ನುವುದಕ್ಕೆ ಹಬ್ಬಕ್ಕೇ ಕಾಯಬೇಕಿತ್ತು. ಆದರೆ ಈಗ ನೆನೆಸಿಕೊಂಡಾಗ ಓವರ್ ದಿ ಕೌಂಟರ್ ಯಾವ ತಿಂಡಿ ಬೇಕಾದರೂ ಸಿಗುತ್ತದೆ - ಆದರೆಆ ತಿಂಡಿಗಳಲ್ಲಿ ಅಜ್ಜಿ - ಅಮ್ಮನ ಪ್ರೀತಿ ಓವರ್ ದಿ ಕೌಂಟರ್ ಸಿಗಲ್ಲ!

ಅಂತಹ ಅಂಗಡಿಗಳ ಹೆಸರುಗಳೇ ಆಕರ್ಷಣೀಯ : ಮನೆ ಹೋಳಿಗೆ, ಹೋಳಿಗೆ ಮನೆ, ಕಜ್ಜಾಯದ ಮನೆ, ಕುರುಕು ತಿಂಡಿ, ಹಳ್ಳಿ ಮನೆ, ನೈವೇದ್ಯಮ್, ತಿಂಡಿಮನೆ, ಇಂತಹ ಅಂಗಡಿಗಳು ಪ್ರತಿ ಗಲ್ಲಿ-ಗಲ್ಲಿಗಳಲ್ಲಿ ಬೆಳೆಯುತ್ತಲೇ ಇವೆ.

ಇನ್ನು ಪ್ರಾಣಿಗಳ ಪ್ರಾಮುಖ್ಯತೆ ನಮ್ಮ ದೇವಾರಾಧನೆಯಲ್ಲಿ ನೋಡುವುದಾದರೆ, ಹಸುಗಳ ಹಾಲು ಕುಡಿದು ಜೀವಿಸುತ್ತಿರುವ ನಾವು ಗೋಮಾತೆಗೆ ತಾಯಿಯ ಸ್ಥಾನ ಕೊಟ್ಟಿದ್ದೇವೆ. ಗೋಪೂಜೆ, ಗೋದಾನ ಅತಿ ಶ್ರೇಷ್ಠ ನಮಗೆ.

ಪ್ರತಿ ಪ್ರಾಣಿಯು ದೇವರ ಪ್ರತಿರೂಪವಾಗಿವೆ. ಆನೆಯ ಮುಖದ ಗಜಾನನ ನಮ್ಮ ಪ್ರಥಮ ಪೂಜ್ಯ ದೇವರು. ನಾವು ಆನೆ ನೋಡಿದರೆ, ನಮಗೆ ಮೊದಲೆನಿಸುವುದು ನಮಸ್ಕಾರ ಮಾಡಬೇಕೆಂದು.

ದುಷ್ಠ ವಿನಾಶಕ (Destroyer)

ಶಿವನ ಸಂಸಾರಕ್ಕೆ ಬರುವುದಾದರೆ,  ಶಿವ ಹಾವನ್ನು ಕೊರಳಿಗೆ ಸುತ್ತಿಕೊಂಡು, ನಂದಿ - ಬಸವಣ್ಣನನ್ನು ತನ್ನ ವಾಹನ ಮಾಡಿಕೊಂಡರೆ, ಪಾರ್ವತಿ - ಹುಲಿ-ಸಿಂಹಗಳೇ ವಾಹನ, ಗಣೇಶನಿಗೆ ಹಾವು ಸೊಂಟಪಟ್ಟಿಯಾದರೆಇಲಿ ವಾಹನಸುಬ್ರಮಣ್ಯನನ್ನು ಹಾವಿನ ರೂಪದಲ್ಲಿ   ಆರಾಧಿಸಿದರೆಆತನ ವಾಹನ ನವಿಲು. ತಂದೆ ಮಕ್ಕಳಿಗೆ ಹಾವು ಅವಿಭಾಜ್ಯ ಅಂಗಗಳಾಗಿದೆ. ಆದರೆ ಆಶ್ಚರ್ಯವೆಂದರೆ ಶತ್ರು ಪ್ರಾಣಿಗಳಾದ ಹುಲಿ/ಸಿಂಹ - ನಂದಿ ; ಹಾವು - ಇಲಿ; ಹಾವು - ನವಿಲು ಶಿವನ ಕುಟುಂಬದಲ್ಲಿ ಜೊತೆಯಾಗಿವೆ.  

ಸಂರಕ್ಷಕ (Preserver)    

ವಿಷ್ಣು ಗರುಡ ವಾಹನ, ಆದರೆ ಅವನಿಗೆ ಸರ್ಪರಾಜನೇ ಮಲಗಲು ಹಾಸಿಗೆ. ಗರುಡ ಸರ್ಪ ವೈರಿಗಳಲ್ಲವೇ? ಲಕ್ಷಿಗೆ ಗೂಬೆಯೇ ವಾಹನ. ಗೂಬೆ - ಸರ್ಪ ವೈರಿಗಲ್ಲವೇ?

ಇದು ನಮಗೆ ತಿಳಿಸುವ ಅತ್ಯಮೂಲ್ಯ ಅಂಶವೆಂದರೆ : ನಮ್ಮ ಕುಟುಂಬಗಳಲ್ಲಿ ಪ್ರತಿಯೊಬ್ಬರ  ಯೋಚನಾಕ್ರಮ  ತದ್ವಿರುದ್ದವಾಗಿದ್ದರು ಸಹ ಒಂದು ಸೂರಿನಡಿ ಅನುಸರಿಸಿಕೊಂಡು ಜೀವಿಸಬೇಕು  ಎಂದು.

ಸೃಷ್ಟಿಕರ್ತ  (Creator)    

ಬ್ರಹ್ಮನ ವಾಹನ ಹಂಸ ಮತ್ತು ಜ್ಞಾನ ಕೊಡುವ ಸರಸ್ವತಿಯ ವಾಹನ ಹಂಸ ಮತ್ತು ನವಿಲು ಆಗಿದೆ.  ಎರಡು ವೈರಿಗಳಲ್ಲ! ತ್ರಿಮೂರ್ತಿ ದಂಪತಿ ಮತ್ತು ಕುಟುಂಬದಲ್ಲಿ ಕೇವಲ ಬ್ರಹ್ಮ ಮತ್ತು  ಸರಸ್ವತಿಯವರ ವಾಹನಗಳು ವೈರಿಗಳಲ್ಲ.

ಇದರ ಮೂಲಕ ನಾವು ತಿಳಿಯಬಹುದುಏನನ್ನಾದರೂ ಸೃಷ್ಟಿಸಲು(creation) ಅಥವಾ ಜ್ಞಾನ  ಸಂಪಾದನೆಗೆ (acquiring knowledge)  ವೈರತ್ವ ಇರಬಾರದೆಂದು.  ಏಕೆಂದರೆ ನಮ್ಮ ವೈರಿಗಳಲ್ಲೂ ನಾವು ಕಲಿಯಬೇಕಾದ ಒಳ್ಳೆಯ ವಿಷಯಗಳು ಬಹಳ ಇರುತ್ತವೆ.  ಆದರೆ ದುಷ್ಟ ಸಂಹಾರ (destroy) ಮತ್ತು ಸಂರಕ್ಷಣೆಗೆ(preserve) ವೈರತ್ವದ ಅವಶ್ಯಕತೆ ಇದೆ ಎಂದು.

ಇನ್ನು ನದಿಗಳು ನಮಗೆ ದೇವರ ಸಮಾನ. ಕುಂಭಮೇಳಗಳಲ್ಲಿ ಜಗತ್ತಿನ ಅತೀ ದೊಡ್ಡ ಮನುಷ್ಯರ ಸಂಗಮ ಇದಕ್ಕೆ ನಿದರ್ಶನ. 

ಪ್ರತಿ ಪೂಜೆ ಸಮಾರಂಭಗಳಲ್ಲಿ ಮಂತ್ರ ಪಠನಗಳಲ್ಲಿ ನದಿಗಳಿಗೆ ಪ್ರಾಮುಖ್ಯತೆ ಕೊಡುತ್ತೇವೆ :ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ; ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

ಇನ್ನು ನಮ್ಮ ಪುರಾಣದ ಕಥೆಗಳ ಬಗ್ಗೆ ಚರ್ಚಿಸುವುದಾದರೆಪ್ರತಿ ಕಥೆಯೂ ನಮ್ಮ ಬದುಕಿನ  ಸಂದರ್ಭಕ್ಕೆ ತಕ್ಕ ದಿಕ್ಕು ತೋರಿಸಲು ಸೃಷ್ಟಿಸಲಾಗಿದೆ.

ಶ್ರೀ ರಾಮ ಮಾತು ಕಡಿಮೆ:              ಆದರೆ ಕಾರ್ಯದಿಂದ ಮತ್ತು ದುಷ್ಟಸಂಹಾರದಿಂದ ಆದರ್ಶಪುರುಷನಾದ.

ಶ್ರೀ ಕೃಷ್ಣ ಮಾತಿನಿಂದ ಮಹಾತ್ಮನಾದ:          ಅವನು ಬೋಧಿಸಿದ ಭಗವದ್ಗೀತೆಯೇ ಒಂದು ಉದಾಹರಣೆ.

ಮಹಾಭಾರತದ ಪಂಚಪಾಂಡವರು ನಮ್ಮ ಪಂಚೇಂದ್ರಿಯಗಳ ರೀತಿ. ಅವರಿಗೆ ಸರಿಯಾದ ಮಾರ್ಗದರ್ಶನ ಕೊಟ್ಟು ಕಾಪಾಡಿದ್ದು ಶ್ರೀ ಕೃಷ್ಣ.ಇದು ನಮ್ಮ ಬುದ್ದಿಶಕ್ತಿಯು  ಪಂಚೇಂದ್ರಿಯಗಳನ್ನು ನಿಗ್ರಹಿಸಬೇಕು ಎಂದು ಸಾರುತ್ತದೆ.                              ಕೌರವರು ನೂರು ಜನ, ನಮಗೆ ಬರುವ ನೂರಾರು ಅತಿಆಸೆಯ ಪ್ರತಿಬಿಂಬವಾಗಿದೆ. ಅವುಗಳನ್ನು ಪಂಚೇಂದ್ರಿಯಗಳ ಸರಿಯಾದ ಬಳಕೆಯಿಂದ ಕಡಿವಾಣ ಹಾಕಬೆಂದು ತಿಳಿಸಿಕೊಡುತ್ತದೆ.

 ಎಲ್ಲಾ ವಿಷಯಗಳು ಹಿಂದೂ ಎನ್ನುವುದು ಕೇವಲ ಧರ್ಮವಲ್ಲ  ಆದರೆ ನಮ್ಮ ಬದುಕಿನ ಆಚರಣೆ (way of life) ಎಂದು ಸಾರುತ್ತವೆ

ನಮ್ಮ ಪುರಾಣದ ಕಥೆಗಳು ಮತ್ತು ನಮ್ಮ ಆಚರಣೆಗಳ ಒಳ ಅರ್ಥ ಹುಡುಕುತ್ತ ಹೋದರೆ ಅದಕ್ಕೆ ಕೊನೆಯಿಲ್ಲ.

ಆದರೆ ಆಧುನೀಕತೆಯ ಪ್ರಭಾವದಿಂದ ಮತ್ತು ಅತೀ ಜನಸಂಖ್ಯೆಯಿಂದ   ಪೂಜನೀಯವಾದ ನಮ್ಮ ಪ್ರಕೃತಿ ನಾಶವಾಗುತ್ತಿದೆ, ಕೆರೆ, ನದಿ, ಸಮುದ್ರಗಳು ಕಲುಷಿತವಾಗಿವೆ. ಇದರಿಂದ ಮನುಷ್ಯನ ಅವನತಿ ಸಮೀಪುಸುತ್ತಿದೆ ಅನ್ನಿಸುತ್ತೆ.

ಬಸವನಗುಡಿಯ ಎಂದೂ ಮರೆಯಲಾಗದ ಮೂರು ವೈದ್ಯೋತ್ತಮರು

- ವಾಸುದೇವ ಕೆ  1970 ರಿಂದ 2010ರವರೆಗೆ ನನ್ನ ಆರೋಗ್ಯವನ್ನು ಕಾಪಾಡಿದ ಕೆಲವು ಬಸವನಗುಡಿಯ ವೈದ್ಯೋತ್ತಮರ ಸ್ಮರಣೆಗೆ ಈ ನನ್ನ ಪುಟ್ಟ ಕಾಣಿಕೆ. ಈ ಡಾಕ್ಟರ್ ಗಳ ಕೈಗುಣದಿಂದ...